Panchatantra | Shrungarada Hongemara lyrics in kannada | Yogaraj Bhat | V Harikrishna | Vijay Prakash – Vijay Prakash Lyrics

Singer | Vijay Prakash |
Music | V Harikrishna |
Song Writer | Yogaraj Bhat |
ಶೃಂಗಾರದ ಹೊಂಗೆ ಮರ Lyrics in kannada
ಶೃಂಗಾರದ ಹೊಂಗೆ ಮರ ಹೂ
ಬಿಟ್ಟಿದೆ
ನಾಚಿಕೆ ನಮ್ಮಾ ಜೊತೆ ಟೂ
ಬಿಟ್ಟಿದೆ
ಕಳ್ಳಾಟಕೆ ಮಳ್ಳ ಮನ ಚೀ
ಅಂದಿದೆ
ಚೆಲ್ಲಾಟಕೆ ಚೆಲುವು ಹೂ
ಎಂದಿದೆ
ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ
ರೋಮಾಂಚನ
ಹೋಗಿ ಬಂತು ಪ್ರಾಣ.
ಶೃಂಗಾರದ ಹೊಂಗೆ ಮರ ಹೂ
ಬಿಟ್ಟಿದೆ
ನಾಚಿಕೆ ನಮ್ಮಾ ಜೊತೆ ಟೂ
ಬಿಟ್ಟಿದೆ
ಬೆನ್ನಿಗೆ ಬೆರಳು ಸೋಕಿ
ಕಣ್ಣೆರಡು ಕೇಳಿವೆ ಬಾಕಿ
ಇದು ತುಂಟ ಮೌನಾಚರಣೆಯು…
ಸ್ಪರ್ಶವೂ ಕೇಳಿದೆ ಕೊಂಚ
ಉಷ್ಣಾಂಶದ ಬೆಚ್ಚನೆ ಲಂಚ
ಶುರು ಜಂಟಿ
ಕಾರ್ಯಾಚರಣೆಯು…
ಗೊತ್ತಿದ್ದೂ ದಾರಿ
ತಪ್ಪಿದಾಗ ಬೆವರಿನ ಹನಿಯೂ
ಹುಚ್ಚೆದ್ದು ಹಾಡು
ಹೇಳಬಹುದೇ ಒಳಗಿನ ದನಿಯು
ಇದು ಆವೇಗದ ಆಲಿಂಗನ
ಹೋಗಿ ಬಂತು ಪ್ರಾಣ
ಶೃಂಗಾರದ ಹೊಂಗೆ ಮರ ಹೂ
ಬಿಟ್ಟಿದೆ
ನಾಚಿಕೆ ನನ್ನ ಜೊತೆ ಟೂ
ಬಿಟ್ಟಿದೆ
ನಲ್ಮೆಯಲ್ಲೆಲ್ಲವೂ ಚಂದ
ಮನ್ಮಥನ ಹಾವಳಿಯಿಂದ
ಬಚಾವಾದರೇನು ಸುಖವಿದೆ…
ಬಿಚ್ಚಿದ ಕೂದಲ ಘನತೆ
ಅರೆ ಮುಚ್ಚಿದ ಕಂಗಳ ಕವಿತೆ
ಪ್ರಣಯಕೊಂದು ಬೇರೆ
ಮುಖವಿದೆ…
ಕಡು ಮೋಹದಲ್ಲಿ ಗಡಿಯ
ರೇಖೆಗೆಲ್ಲಿದೆ ಬೆಲೆಯು
ತಿಳಿಗೇಡಿಯಾಗದೇನೆ
ಸಿಗದು ತೋಳಿಗೆ ನೆಲೆಯು
ರತಿ ರಂಗೇರಲು ಪ್ರತಿ ಕ್ಷಣ
ಹೋಗಿ ಬಂತು ಪ್ರಾಣ
ಶೃಂಗಾರದ ಹೊಂಗೆ ಮರ ಹೂ
ಬಿಟ್ಟಿದೆ
ನಾಚಿಕೆ ನನ್ನ ಜೊತೆ ಟೂ
ಬಿಟ್ಟಿದೆ ಟೂ
ಕಳ್ಳಾಟಕೆ ಮಳ್ಳ ಮನ ಚೀ
ಅಂದಿದೆ ಚೀ
ಚೆಲ್ಲಾಟಕೆ ಚೆಲುವು ಹೂ
ಎಂದಿದೆ ಹೂ
ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ
ರೋಮಾಂಚನ
ಹೋಗಿ ಬಂತು ಪ್ರಾಣ